SearchBrowseAboutContactDonate
Page Preview
Page 58
Loading...
Download File
Download File
Page Text
________________ ಉಪೋದ್ಘಾತ | ೫೩ ನಿನ್ನನೆ ನಚ್ಚಿದಂ ಕುರುಮಹೀಪತಿ ನಿನ್ನ ಶರಾಳಿಗಳೆ ಮು ಸ್ನಂ, ನಡುಗುತ್ತಮಿರ್ಪುದು ಅರಿಸಾಧನಸಂಪದಂ ಅಂತ ಶಸ್ತ್ರಸಂ ಪನ್ನನೆ ಆಗಿ ಶಲ್ಯನನ ಸಾರಥಿಯಾಗಿ ಮಾಡಿ ಕಾದು ನೀಂ ಎಂದು ತಮ್ಮನನ್ನುಪದೇಶಿಸಿ ಆಶೀರ್ವಾದಮಾಡಿ ಗೆಲ್ಲುವ ಉಪಾಯವನ್ನು ಸೂಚಿಸಿ ಕಳುಹಿಸುತ್ತಾರೆ. ಅದರಂತೆ ದುಧನನು ಶಲ್ಯನನ್ನು ಕರ್ಣನ ಸಾರಥಿಯಾಗಿರುವಂತೆ ಪ್ರಾರ್ಥಿಸುತ್ತಾನೆ. ಅದಕ್ಕೆ ಮದ್ರರಾಜನು ಕಿನಿಸಿ ಕಿಂಕಿಣಿ ವೋಗಿ ಹೀಗೆ ಹೇಳುತ್ತಾನೆ. ಒಂದೆ ಕಡಂಗಿ ತೇರನೆಸಗೆಂಬುವನ್ ಅಂಬಿಗನ್, ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಳುಕಾಳಿನಾಗೆ ಮ ತೃ ಂದನ ಚೋದನಕ್ರಮಮದುಂ ಪೊಲೆಯಂಗಮರ್ದಿಕರ್ುಂ ಅಂತುಟಂ ನೀ ದಯೆಗೆಯ್ದು ಪೇಳೆ ಇದನಾರ್ ಪವರ್ ಫಣಿರಾಜಕೇತನಾ ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜನಿಕೇತನನಿಂತೆಂದಂ:ಮಾವ, ಸಾಮಾನ್ಯ ಮನುಜನಲ್ಲನಂಗಮಹೀಶಂ ಕುಲಹೀನನೆ ಅಪ್ಲೋಡ ಕೇ ವಲಬೋಧಂ ಪರಶುರಾಮನ್, ಏನ್, ಈಗುಮ ನಿ ರ್ಮಲಿನಕುಲಂಗಲ್ಲದೆ ಪಿಡಿ ಯಲಲ್ಲದಂತಪ್ಪ ದಿವ್ಯ ಬಾಣಾವಳಿಯಂ ಮಣಿಕುಂಡಲಮುಂ ಕವಚಂ ಮಣಿಯದ ಚಾರಿತ್ರಮುಗ್ರತೇಜಮುಮೀ, ಒ qುಣಮುಂ ಕಲಿತನಮುಂ, ಇವೇಂ ಪ್ರಣತಾರೀ ಸೂತಸುತನೊಳೊಡವುಟ್ಟುಗುಮೆ ಕಲಿತನದ ನೆಗಟ್ಟಿ ಕಸವರ ಗಲಿತನದ ಪೊದಲ್ಲಿ ಪರಮಕೋಟಿಗೆ ಪರಾರ್ ಸಲೆ ಕರ್ಣನಲ್ಲದೆನಿಸುವ ಕಲಿತನಮುಂ ಹರಿಗೆ ಕವಚಮಿತ್ತುದೆ ಪೇಯ್ದುಂ ಎಂದು 'ಶಲ್ಯನ ಹೃಚ್ಚಲ್ಯಮಂ ಕಲೆ' ನುಡಿಯಲು ಅವನ ಸಾರಥ್ಯದಲ್ಲಿ ತನ್ನ ಪರಾಕ್ರಮವನ್ನು ಅದ್ವಿತೀಯನಾಗಿ ಮೆರೆಯುತ್ತಾನೆ. ಕರ್ಣಾರ್ಜುನ ಕಾಳಗವು ಲೋಕತ್ರಯಕ್ಕೂ ಆಶ್ಚರ್ಯವನ್ನುಂಟುಮಾಡಿತು. ಮೊದಲಿನ ಒಪ್ಪಂದದ ಪ್ರಕಾರ ತನ್ನ ಮಾತಿನಂತೆ ತಲೆಗೆ ಗುರಿಯಿಟ್ಟ ಬಾಣವನ್ನು ಇಳಿಸಿ ಎದೆಗೆ ಹೊಡೆಯದುದರಿಂದ ಶಲ್ಯನು ಕೋಪಗೊಂಡು ಸಾರಥ್ಯವನ್ನು ನಡೆಸದೆ ತೇರನ್ನಿಳಿದು ಹೊರಟುಹೋಗುವನು. ಕರ್ಣನು ತಾನೇ ತೇರನ್ನು ನಡೆಸಿಕೊಂಡು ಏಕಾಂಗಶೌರದಿಂದ ಯುದ್ಧ ಮಾಡುವನು. ಧರಿತ್ರಿ ಅವನ ತೇರಿನ ಚಕ್ರವನ್ನು ನುಂಗುವಳು. ರಥದಿಂದಿಳಿದು ಗಾಲಿಯನ್ನೆತ್ತುವಷ್ಟರಲ್ಲಿಯೇ ಅವನನ್ನಿಸುವಂತೆ ಮುಕುಂದನು ಅರ್ಜುನನನ್ನು ಬೋಧಿಸಲು ಅರ್ಜುನನಿಗೆ ಎಂದೂ ಇಲ್ಲದ ಮರುಕತೋರಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy