SearchBrowseAboutContactDonate
Page Preview
Page 105
Loading...
Download File
Download File
Page Text
________________ ೧೦೦ | ಪಂಪಭಾರತಂ ಕಂ || ಅಗುತ್ತಿರಲಾ ಕುಟಿಯೊಳ್ ತೊ ಟ್ರಗ ನಿಧಿಗಂಡಂತ ವಸುಧಗಸದಳವಾಯಾ | ಮಗನಂದಮಂದು ಲೋಗರ್ ಬಗದಿರ ವಸುಷೇಣನೆಂಬ ಹೆಸರಾಯಾರ್ಗ || ಅಂತು ವಸುಷೇಣನಾ ಲೋ ಕಾಂತಂಬರಮಳವಿ ಬಳೆಯೆ ಬಳಸಕಮದೋ || ರಂತ ಜನಂಗಳ ಕರ್ಡೂ ಪಾಂತದೊಳೊಗದಸೆಯ ಕರ್ಣನೆಂಬನುಮಾದಂ || res ವರೆಗೆ ಆಗಿಯಾತಂ ಶಸ್ತಶಾಸ್ತ್ರವಿದ್ಯೆಯೊಳತಿಪರಿಣತನಾಗಿ ನವಯೌವನಾರಂಭದೊಳ್ ಚಂ 10 ಪೊಡೆದುದು ಬಿಲ್ಲ ಜೇವೊಡೆಯ ಮಾಜುವ ವೈರಿ ನರೇಂದ್ರರು ಸಿಡಿ ಲೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದಡರಂ ನಿರಂತರಂ | ಕಡಿಕಡಿದಿತ್ತ ಪೊನ್ನ ಬುಧ ಮಾಗಧ ವಂದಿಜನಕ್ಕೆ ಕೊಟ್ಟ ಕೋ ಡೆಡರದೆ ಬೇಡಿಮೋಡಿಯಿದು ಚಾಗದ ಬೀರದ ಮಾತು ಕರ್ಣನಾ || ೯೯. ವ|| ಅಂತು ಭುವನಭವನಕ್ಕೆಲ್ಲಂ ನೆಗಲ್ಲ ಕರ್ಣನ ಪೊಗಂ ನೆಗಳಯುಮುನೀಂದ್ರ ಕೇಳು ಮುಂದೆ ತನ್ನಂಶದೊಳ್ ಪುಟ್ಟುವರ್ಜುನಂಗಮಾತಂಗಂ ದ್ವಂದ್ವಯುದ್ಧಮುಂಟೆಂಬುದಂ ತನ್ನ ದಿವ್ಯಜ್ಞಾನದಿಂದಮದುವಿಂತಲ್ಲದೀತನನಾತಂ ಗೆಲಲ್ ಬಾರದಂದು ಮೈಲಿಗೆಯನ್ನು ಆಚರಿಸಿದಳು. ೯೭. ತೋಡುತ್ತಿರುವ ಗುಳಿಯಲ್ಲಿ ನಿಧಿ ದೊರೆತಂತಾಯಿತು ಈ ಮಗುವಿನ ಸೌಂದರ್ಯ ಎಂದು ಜನರಾಡಿಕೊಳ್ಳುತ್ತಿರಲು ಆ ಮಗುವಿಗೆ ವಸುಷೇಣನೆಂಬ ಹೆಸರಾಯಿತು-೯೮. ಹಾಗೆಯೇ ವಸುಷೇಣನ ಪರಾಕ್ರಮವು ಲೋಕದ ಎಲ್ಲಿಯವರೆಗೆ ಬೆಳೆಯಲು ಆ ಬೆಳದ ರೀತಿ ಒಂದೇಪ್ರಕಾರವಾಗಿ ಜನಗಳ ಕರ್ಣ(ಕಿವಿ)ಗಳ ಸಮೀಪದಲ್ಲಿ ಹರಡುತ್ತಿರಲು (ಕೂಸು) ಕರ್ಣನೆಂಬ ಹೆಸರುಳ್ಳವನೂ ಆದನು. ವ|| ಶಸ್ತ್ರ ಮತ್ತು ಶಾಸ್ತ್ರವಿದ್ಯೆಗಳಲ್ಲಿ ಪೂರ್ಣ ಪಾಂಡಿತ್ಯವನ್ನು ಪಡೆಯಲು ಅವನಿಗೆ ಯವ್ವನೋದಯವೂ ಆಯಿತು. ೯೯. ಅವನ ಬಿಲ್ಲಿನ ಟಂಕಾರವೇ ಶತ್ರುರಾಜರನ್ನು ಹೋಗಿ ಅಪ್ಪಳಿಸಿತು. ನಿರಂತರವಾಗಿ ದಾನ ಮಾಡಿದ ಅವನ ಚಿನ್ನದ ರಾಶಿಯೇ - ವಿದ್ವಾಂಸರಿಗೂ ವಂದಿಮಾಗಧರಿಗೂ ಕೊಟ್ಟ ದಾನವೆ ಅವರಿಗಿದ್ದ ದಾರಿದ್ರವನ್ನು ಸಿಡಿಲುಹೊಡೆದ ಹಾಗೆ ಅಟ್ಟಿಮೆಟ್ಟಿ ಕತ್ತರಿಸಿಹಾಕಿತು. ಅವನಲ್ಲಿಗೆ ಹೋಗಿ ಎಂಬಂತೆ ಅವನ ತ್ಯಾಗದ ಮತ್ತು ವೀರ್ಯದ ಮೇಲೆ ಲೋಕಪ್ರಸಿದ್ಧವಾಯಿತು. ವ|| ಹೀಗೆ ಲೋಕಪ್ರಸಿದ್ದವಾದ ಕರ್ಣನ ಹೊಗಳಿಕೆಯನ್ನೂ ಪ್ರಸಿದ್ದಿಯನ್ನೂ ಇಂದ್ರನು ಕೇಳಿ ಮುಂದೆ ತನ್ನಂಶದಲ್ಲಿ ಹುಟ್ಟುವ ಅರ್ಜುನನಿಗೂ ಈತನಿಗೂ ದ್ವಂದ್ವಯುದ್ಧವುಂಟಾಗುತ್ತದೆ ಎಂದು ತನ್ನ ದಿವ್ಯಜ್ಞಾನದಿಂದ ತಿಳಿದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy